August 31, 2021

ರೈತರ ಕೈಗೆ ಒಂದಿಷ್ಟು ಅದಾಯ : ಒಂದೆಲಗ

 

 



ರೈತರ ಕೈಗೆ ಒಂದಿಷ್ಟು ಅದಾಯ :ಒಂದೆಲಗ

                                                                                  ಚಿತ್ರ ಲೇಖನ :-ಸಿ.ಎಸ್.ನಿರ್ವಾಣಸಿದ್ದಯ್ಯ

 ಬೆಂಗಳೂರಿನ ಹೆಸರಘಟ್ಟ ಗ್ರಾಮದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಒಂದೆಲಗ ಸಸ್ಯದ ಅರ್ಕಾ ದಿವ್ಯ,ಮತ್ತು ಅರ್ಕಾ ಪ್ರಭಾವಿ ಎನ್ನುವ ಹೊಸ ತಳಿಗಳನ್ನು ಅವಿಷ್ಕಾರ ಮಾಡಿದೆ. ಅರ್ಕಾ ದಿವ್ಯ ಸಸ್ಯಹಾರವಾದ ತಳಿಯಾದರೆ,ಅರ್ಕಾ ಪ್ರಭಾವಿ ಔಷಧಿಯ ತಳಿಯಾಗಿದೆ. ದಕ್ಷಿಣ ಭಾರತದಲ್ಲಿರುವ ಸುಮಾರು 38 ಬಗೆಯ ತಳಿಗಳನ್ನು ಅಧ್ಯಾಯನ ಮಾಡಿ ಎರಡು ಹೊಸ ತಳಿಗಳನ್ನು ಸಂಸ್ಥೆಯ ವಿಜ್ಞಾನಿಗಳಾದ ಹಿಮಾಬಿಂಧು ಮತ್ತು ರೋಹಿಣಿ ಅವರು ಅವಿಷ್ಕಾರ ಮಾಡಿದ್ದಾರೆ.


 

    ಸಾಮಾನ್ಯವಾಗಿ ಒಂದೆಲಗ ಅಂದ ಕೂಡಲೇ  ಅದಾ ಇಲ್ಲೇ ನಮ್ಮನೆ ಬೇಲಿ ಸಂಧಿಯಲ್ಲಿ, ಕುರುಚಲು ಗಿಡಗಳ ಮಧ್ಯೆ ಬೆಳೆಯುತ್ತೆ.ಅದು ಔಷಧಿ ಗಿಡವಂತೆ ಬಿಡಿ ಅನ್ನುವ ತಿರಸ್ಕಾರ ಭಾವ ಅನೇಕರಲ್ಲಿದೆ. ಆದರೆ ಒಂದೆಲಗವು ರೈತರ ಬೊಗಸೆಗೆ ಒಂದಿಷ್ಟು ಅದಾಯವನ್ನು ತರುವ ಬೆಳೆಯಾಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ.

    ಒಂದೆಲಗ ಬೆಳೆಯನ್ನು ಆಹಾರ ಮತ್ತು ಅಯುರ್ವೇದ ಔಷಧಿ ತಯಾರಿಕೆಯಲ್ಲಿ ಬಳಸುತ್ತಿರುವುದರಿಂದ ಬೆಳೆಯು ತನ್ನದೇ ಆದ ಮಾರುಕಟ್ಟೆಯನ್ನು ಇಂದು ಕುದುರಿಸಿಕೊಂಡಿದೆ. ಹಾಗಾಗಿ ಬೆಳೆಯುವ ರೈತರ ಕೈಗೆ ಒಂದಿಷ್ಟು ಕಾಸನ್ನು ಇದು ತಂದು ಕೊಡಬಲ್ಲದು.



ಬೆಳೆಯುವ ವಿಧಾನ

ಎರಡು ವಿಧದ ಬೆಳೆಗಳನ್ನು ಬೆಳೆಯುವ ವಿಧಾನ ಒಂದೇ ಅಗಿರುತ್ತದೆ. ಮಳೆಗಾಲದಲ್ಲಿ ನಾಟಿ ಮಾಡುವುದು ಹೆಚ್ಚು ಸೂಕ್ತ.  ಸಾಮಾನ್ಯವಾಗಿ ಸಸಿಯನ್ನು ಅಡಿಕೆ ಮತ್ತು ತೆಂಗಿನಮರದ ಮಧ್ಯ ಸಾಲಿನಲ್ಲಿ ನೀರಸವಾಗಿ ಬೆಳೆಯಬಹುದು. ಇಲ್ಲವೇ ಮಣ್ಣಿನ ದಿಬ್ಬಗಳನ್ನು ಮಾಡಿ ಅದರ ಮೇಲೆ ನಾಟಿ ಮಾಡಬಹುದು.

ಗಿಡಕ್ಕೆ ಮಣ್ಣಿನಲ್ಲಿ ತೇವಾಂಶ ಮತ್ತು ಹೆಚ್ಚು ನೆರಳು ಇರುವ ಹಾಗೆ ಪೋಷಿಸ ಬೇಕು. ಪರದೆಗಳನ್ನು ಹಾಕಿ ಇಲ್ಲವೇ ಚಪ್ಪರವನ್ನು ಹಾಕಿ ಸಸಿಗಳಿಗೆ ನೆರಳು ಬೀಳುವ ವ್ಯವಸ್ಥೆ ಮಾಡಬೇಕಾಗುತ್ತದೆ. 90 ದಿನಗಳ ಬೆಳೆ ಇದಾಗಿದ್ದು, ನಂತರ ಪ್ರತಿ ತಿಂಗಳು ಎಲೆಗಳನ್ನು ಕೊಯ್ಯಬಹುದು. ಎಲೆಗಳನ್ನು ಕತ್ತರಿಸಿದ ಹಾಗೆ ಗಿಡವು ಸಮೃದ್ದಿಯಿಂದ ಬೆಳೆಯುತ್ತದೆ.



ಭಾದಿಸಿದ ರೋಗ

    ಮಳೆಗಾಲದಲ್ಲಿ ಬೆಳೆಗೆ ಫಂಗಸ್ ಎನ್ನುವ ರೋಗ ಬರುತ್ತದೆ. ಅದು ಬಿಟ್ಟರೆ ಯಾವುದೇ ಕೀಟವಾಗಲೀ,ರೋಗವಾಗಲೀ ಗಿಡವನ್ನು ಬಾಧಿಸುವುದಿಲ್ಲ. ಗಿಡವನ್ನು ಸರಾಗವಾಗಿ ಹೆಚ್ಚಿನ ಮುರ್ತುವರ್ಜಿ ಇಲ್ಲದೇ ಬೆಳೆಯ ಬಹುದು.

  ಒಂದು ಎಕರೆ ಒಂದೆಲಗ ಬೆಳೆಯಲು ನೂರು ಕೆ.ಜಿ.ಯಷ್ಟು ಸಸಿಗಳು ಬೇಕಾಗುತ್ತದೆ. ನೂರು ಕೆ.ಜಿ. ಬೆಳೆಯು ಸಾವಿರ ಕೆ.ಜಿ.ಯಷ್ಟು ಎಲೆಗಳನ್ನು ನೀಡುತ್ತದೆ.



ಮಾರುಕಟ್ಟೆ ಸ್ಥಿತಿ

     ಒಂದೆಲಗವು ಈಗ ವಿಶ್ವದ್ಯಾಂತ  ಬೇಡಿಕೆ ಇದ್ದು, ಎಲೆಗಳನ್ನು ವಿದೇಶಿಗಳಿಗೆ ರಪ್ತು ಮಾಡಲಾಗುತ್ತಿದೆ, ಒಣಗಿದ ಎಲೆಗಳಿಗೆ ಕೆ.ಜಿ.ಗೆ ನೂರು ರೂಪಾಯಿ,ತಾಜಾ ಎಲೆಗಳಿಗೆ 25 ರೂಪಾಯಿ,ಬೇರು ಸಮೇತ ಗಿಡಕ್ಕೆ 200 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಕರ್ನಾಟಕದಲ್ಲಿ ಒಂದೆಲಗ ಬೆಳೆಯುವರ ಸಂಖ್ಯೆ ವಿರಳವಾಗಿದೆ. ಹಾಗಾಗಿ ಬೇರೆ ರಾಜ್ಯಗಳಿಂದ ಪಡೆಯಲಾಗುತ್ತಿದೆ ಎನ್ನುತ್ತಾರೆ ಬೆಂಗಳೂರಿನ ನೇಚರ್ ರೇಮಿಡ್ಸ್ ಕಂಪನಿಯ ಮಹೇಶ್ವರ್. (99452-32116)

    ಒಂದೆಲಗ ತಳಿಗಳು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 080-23086100/251 ಸಂಪರ್ಕಿಸಬಹುದು.


1 comment:

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...