September 29, 2021

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ



ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊಯಲಿ, ರಾಮಲಿಂಗರೆಡ್ಡಿ,ಯಲಹಂಕ ಮುಖಂಡರಾದ ಗೋಪಾಲಕೃಷ್ಣ,ಕೇಶವರಾಜಣ್ಣ ಇದ್ದರು. 

ಹೆಸರಘಟ್ಟ:-"ಬೂತ್ ಮಟ್ಟದಲ್ಲಿ ಸಮಸ್ಯೆಗಳನ್ನು ಅಲಿಸುವ ಪರಿಹಾರ ಕಂಡು ಕೊಳ್ಳುವ  ಕೆಲಸವಾಗಬೇಕು. ಮಹಿಳೆ ಸಮಸ್ಯೆಯ ಧ್ವನಿಯಾಗಿ ಕಾಂಗ್ರೇಸ್ ಕೆಲಸ ಮಾಡಬೇಕು. ಆ ದಿಸೆಯಲ್ಲಿ ಕಾರ್ಯಕ್ರಮವನ್ನು ರೂಪಿಸುತ್ತಿದ್ದು,ಕ್ರಿಯಾಶೀಲವಾಗಿ ಕೆಲಸ ಮಾಡಲು ಯುವ ಕಾರ್ಯಕರ್ತರು ಪಣ ತೊಡಬೇಕು" ಎಂದು ಕಾಂಗ್ರೇಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೇಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಅವರು ಹೆಸರಘಟ್ಟ ಹೋಬಳಿ ಸೋಲದೇವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗಾಂಧಿ ನಡೆ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
    "ಆಶಾ ಕಾರ್ಯಕರ್ತರು,ಮಹಿಳೆಯರಿಗೆ ಮೀಸಲಾತಿ ಇವುಗಳನ್ನು ತಂದ ಪಕ್ಷ ಕಾಂಗ್ರೇಸ್. ಇಂದು ಜನರು ನಮ್ಮ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡುವ ಪಕ್ಷ ಅಧಿಕಾರದಲ್ಲಿ ಇರಬೇಕು ಎಂದು ಬಯಸುತ್ತಿದ್ದಾರೆ." ಎಂದು ಅವರು ತಿಳಿಸಿದರು.
    ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಅವರು ಮಾತನಾಡಿ "ಗಾಂಧಿ ಬಗ್ಗೆ ಮಾತನಾಡುವ ಅರ್ಹತೆಯನ್ನು ನಾವು ಕಳೆದು ಕೊಂಡಿದ್ದೀವಿ. ಕಾಂಗ್ರೇಸ್ ಈ ಹೊತ್ತಿನಲ್ಲಿ ಅಧಿಕಾರದಲ್ಲಿ ಇರಬೇಕಿತ್ತು. ಯ್ಯಾಕೆಂದರೆ ಬಿ.ಜೆ.ಪಿ. ಅಪಾಯಕಾರಿ ಮತ್ತು ಗಂಡಾಂತರ. ಬೆಲೆ ಏರಿಕೆಯಿಂದ ಜನ ಸಮಾನ್ಯರ ಬದುಕನ್ನು ಹಾಳುಗೆಡವಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ."ಎಂದು ಬೇಸಾರ ವ್ಯಕ್ತಪಡಿಸಿದರು.
    ವಿಧಾನಪರಿಷತ್ ಸದಸ್ಯ ಎಲ್.ಹನುಮಂತಪ್ಪ ಅವರು "ಗಾಂಧಿ ಜನ ಸೇವೆಯಲ್ಲಿ ದೇವರನ್ನು ಕಂಡರು. ಗಾಂಧಿ ತತ್ವಗಳು ಇಂದು ಹೆಚ್ಚು ಪ್ರಸ್ತುತ. ಈ ದೇಶದಲ್ಲಿ ಮಹಿಳೆ ಅತ್ಯುನತ್ತ ಸ್ಥಾನವನ್ನು ಏರಿದಾಗ ಮಾತ್ರ ಭಾರತ ಪೂರ್ಣವಾದ ಸ್ವಾತಂತ್ರ್ಯ ಲಭಿಸಿದೆ ಎಂದು ಅರ್ಥ."ಎಂದರು.
    ವಿಧಾನಪರಿಷತ್ ಸದಸ್ಯ ಎಂ.ನಾರಾಯಣ್ ಸ್ವಾಮಿ ಅವರು ಮಾತನಾಡಿ "ಶಿವರಾಮಕಾರಂತ ಬಡಾವಣೆಯ ಬಗ್ಗೆ ಮುಖ್ಯ ಮಂತ್ರಿಯ ಬಳಿ ಮಾತನಾಡಿದ್ದು,17 ಹಳ್ಳಿಗಳ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಈಗಾಗಲೇ ಸದನದಲ್ಲಿ ಪ್ರಶ್ನಿಸಿ ಉತ್ತರವನ್ನು ಪಡೆದಿದ್ದು,ಸಕಾಲದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ರೈತರಿಗೆ ಅನುಕೂಲವಾಗುವ ರೀತಿ ಕಾಂಗ್ರೇಸ್ ಕೆಲಸ ಮಾಡುತ್ತದೆ" ಎಂದು ಅವರು ಭರವಸೆ ನೀಡಿದರು.
     ಸಮಾರಂಭದಲ್ಲಿ ಯಲಹಂಕ ಕಾಂಗ್ರೇಸ್ ಮುಖಂಡ ಗೋಪಾಲಕೃಷ್ಣ, ಕೇಶವರಾಜಣ್ಣ,ಕಾಂಗ್ರೇಸ್ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್,ರಾಮಲಿಂಗರೆಡ್ಡಿ, ಹೆಸರಘಟ್ಟ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸಂಧ್ಯಾ, ಪಂಚಾಯಿತಿ ಸದಸ್ಯರಾದ ಚಾಂದ್ ಪಾಶ  ಅವರು ಭಾಗವಹಿಸಿದ್ದರು.

No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...