June 24, 2021

ಎ.ಪಿ.ಎಂ.ಸಿ. ವರ್ತಕರ ಬಾಡಿಗೆ ಮನ್ನ ಮಾಡಿ

 ದಾಸನಪುರ ಎ.ಪಿ.ಎಂ.ಸಿ. ವರ್ತಕರ ಬಾಡಿಗೆ ಮನ್ನ ಮಾಡಿ

{ಹೆಸರಘಟ್ಟ ಸಮೀಪ ಗೋಪಾಲಪುರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ಗಳನ್ನು ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ವಿತರಿಸಿದರು. ಈ ಕುರಿತು ವರದಿ ಇಲ್ಲಿದೆ.}


ಹೆಸರಘಟ್ಟ ಸಮೀಪ ಗೋಪಾಲಪುರ ಗ್ರಾಮದಲ್ಲಿ ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು. ಕಾಂಗ್ರೇಸ್ ಮುಖಂಡರಾದ ಪ್ರೇಮಲತಾ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೇಶವಮೂರ್ತಿ ಇದ್ದರು.

ಹೆಸರಘಟ್ಟ:-"ದಾಸನಪುರ ಎ.ಪಿ.ಎಂ.ಸಿ.ಯಲ್ಲಿರುವ ವರ್ತಕರ ಮಳಿಗೆಗಳ ಬಾಡಿಗೆಯನ್ನು ರದ್ದು ಮಾಡಬೇಕು. ವ್ಯಾಪಾರ ಅಭಿವೃದ್ದಿಗೆ ಒತ್ತು ನೀಡಿದೆ ಬರೀ ಬಾಡಿಗೆಯನ್ನು ವಸೂಲಿ ಮಾಡಲು ನೋಟಿಸ್ ನೀಡುತ್ತಿರುವ ಕ್ರಮ ಖಂಡನೀಯ.ಯಶವಂತಪುರದಿಂದ ಸ್ಥಳಾಂತರಗೊಂಡಿರುವ ವರ್ತಕರು ಇಲ್ಲಿಯೇ ವ್ಯಾಪಾರವನ್ನು ಮುಂದುವರಿಸುವಂತೆ ಸರ್ಕಾರ ಅದೇಶ ಮಾಡಬೇಕು" ಎಂದು ಕಾಂಗ್ರೇಸ್ ಮುಖಂಡ ಕೇಶವರಾಜಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅವರು ದಾಸನಪುರ ಹೋಬಳಿ ಗೋಪಾಲಪುರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು,ದಿನಗೂಲಿ ನೌಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. 

"ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಶಿವರಾಮಕಾರಂತ ಬಡಾವಣೆಯನ್ನು ಮಾಡಲು ಬಿಡುವುದಿಲ್ಲ. ಮನೆ ಒಡೆಯಲು ಬಂದರೆ ಅಡ್ಡ ಮಲಗುವುದಾಗಿ ಹಿಂದೆ ಹೇಳಿದ್ದರು. ಈಗ ಅವರ ಬಳಿ ಅಧಿಕಾರವಿದೆ. ರೈತರನ್ನು ರಕ್ಷಿಸುವ ಬಲ ಇದೆ. ರಾಜಕೀಯ ಬಿಟ್ಟು ರೈತರನ್ನು ಉಳಿಸುವ ಕೆಲಸವಾಗಬೇಕು" ಎಂದು ಅವರು ತಿಳಿಸಿದರು.

"ಆಲೂರು ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಎರಡು ತಿಂಗಳು ಅಗಿವೆ. ಇನ್ನೂ ಅಧ್ಯಕ್ಷರ ಆಯ್ಕೆಯಾಗಿಲ್ಲ. ಲಾಕ್ ಡೌನ್ ವಿಳಂಬವಾಗಿರುವುದರಿಂದ ಎಲ್ಲವು ತಡವಾಗುತ್ತಿದೆ. ಶೀಘ್ರವೇ ಅಧ್ಯಕ್ಷರ ಆಯ್ಕೆಯಾಗಿ ಪಂಚಾಯಿತಿ ಅಭಿವೃದ್ದಿ ಕೆಲಸಗಳು ಅಗಲಿ.ಪಂಚಾಯಿತಿ ಸದಸ್ಯರು ಕೊರೊನಾ ಈ ವೇಳೆಯಲ್ಲಿ ಜನರ ಸೇವೆಯನ್ನು ಮಾಡಬೇಕು" ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರವಿಕುಮಾರ್,ಕಾಂಗ್ರೇಸ್ ಮುಖಂಡರಾದ ಪ್ರೇಮಲತಾ ಮತ್ತು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೇಶವಮೂರ್ತಿ ಉಪಸ್ಥಿತರಿದ್ದರು.



No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...