June 05, 2021

ಗೋಪಾಲಪುರ: ಚಿಣ್ಣರಿಗೆ ನಿಸರ್ಗ ಪಾಠ


ಗೋಪಾಲಪುರ ಗ್ರಾಮದಲ್ಲಿರುವ ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯು ಚಿಣ್ಣರಿಗೆ ಸಸಿಗಳನ್ನು ವಿತರಿಸಿ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಿತ್ತು. ಸಂಸ್ಥೆಯ ಅಧ್ಯಕ್ಷರಾದ ವೀಣಾ ರಮೇಶ್,ಗೋಪಾಲಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಲತಾ, ಮತ್ತು ಕೃಷ್ಣಪ್ಪಇದ್ದರು .


ಹೆಸರಘಟ್ಟ:-ಗೋಪಾಲಪುರ ಗ್ರಾಮದ ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯು ಚಿಣ್ಣರಿಗೆ ಸಸಿಗಳನ್ನು ವಿತರಿಸಿ ಪರಿಸರದ ಬಗ್ಗೆ ಅರಿವು ಮೂಡಿಸಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತ್ತು. 

"ಪರಿಸರದ ಬಗ್ಗೆ ಮುಂದಿನ ತಲೆಮಾರಿಗೆ ಜಾಗೃತಿ ಮತ್ತು ಅರಿವು ಎರಡನ್ನು ನೀಡಿ ಪ್ರಕೃತಿಯನ್ನು ಉಳಿಸಿ ಕೊಳ್ಳುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿಯ ಒಡಲಲ್ಲಿ ಅನೇಕ ಜೀವ ಸಂಕುಲಗಳು ನೆಲೆಸಿವೆ.ಅದೆಷ್ಟು ಜೀವಗಳ ಸಂಕುಲವನ್ನು ಮನುಷ್ಯ ಪ್ರತಿ ದಿನ ತನ್ನ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿದ್ದೀನಿ. ನಿಸರ್ಗವನ್ನು ಉಳಿಸಿಕೊಂಡೆ ಮನುಷ್ಯ ಬದುಕುಬೇಕು"ಎಂದು ವಾತ್ಸಲ್ಯ ಮಹಿಳಾ ಸೇವಾ ಸಂಸ್ಥೆಯ ಮೇಲೆ ಅಧ್ಯಕ್ಷರಾದ ವೀಣಾ ರಮೇಶ್ ಅಭಿಪ್ರಾಯ ಪಟ್ಟರು.

" ಅನೇಕ ಪಗಂಡಗಳಲ್ಲಿ ಮದುವೆಯ ದಿನ ಒಂದು ಗಿಡವನ್ನು ನೆಡುವ ಸಂಪ್ರದಾಯವಿತ್ತು.ಗಿಡ ಬೆಳೆದ್ದಂತೆ ಮನೆಯು ಬೆಳೆಯುತ್ತದೆ ಎಂಬ ನಂಬಿಕೆ ಇತ್ತು. ಬಹುಶಃ ಹಿಂದಿನವರಿಗೆ ಪ್ರಕೃತಿಯ ಮಹತ್ವದ ಅರಿವು ಇದ್ದಿದ್ದರಿಂದ ಈ ತರದ ಆಚರಣೆಗಳನ್ನು ತಂದಿರಬೇಕು. ಇಂದು ಅನೇಕ ಆಚರಣೆಗಳನ್ನು ಬಿಟ್ಟು ಅಪಾಯಗಳನ್ನು ಮೈ ಮೇಲೆ ಹಾಕಿಕೊಂಡಿದ್ದೀವಿ."ಎಂದು ಅವರು  ವಿಷಾದ ವ್ಯಕ್ತಪಡಿಸಿದರು. 

"ಕೊರೊನಾ ಸೋಂಕಿನ ತಗಲಿದ ಹೆಚ್ಚಿನ ಜನರು ಅಮ್ಲಜನಕದ ಕೊರತೆಯಿಂದ ಸಾವುನ್ನಪ್ಪುತ್ತಿದ್ದಾರೆ. ಪ್ರಕೃತಿ ಹೀಗೆ ನಾಶವಾದರೆ ಬಹುಶಃ ಮುಂದಿನ ದಿನದಲ್ಲಿ ಮನುಷ್ಯ ಕುಲವು ಅಮ್ಲಜನಕದ ಕೊರತೆಯಿಂದ ನಾಶವಾಗಬಹುದು. ಹಾಗಾಗಿ ಇಂದಿನ ಚಿಣ್ಣರಿಗೆ ಮರವನ್ನು ಬೆಳೆಸುವ,ಮರಗಳ ಮಹತ್ವವನ್ನು ತಿಳಿಸುವ ಕೆಲಸವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಿಣ್ಣರಿಗೆ ಸಸಿ ನೆಡಿಸಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು" ಎಂದು ಅವರು ತಿಳಿಸಿದರು.


1 comment:

  1. ಹೌದು ಸರ್ ನಿಜವಾದ ಮಾತು ಹಿತ್ತಲಗಿಡ ಮದ್ದಲ್ಲ, ಹಿಂದಿನ ಆಚರಣೆಗಳು ಈಗಿನವರಿಗೆ ವೈಜ್ಞಾನಿಕ ಅಧ್ಯಯನ🤗

    ReplyDelete

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...