June 11, 2021

ಸಿದ್ದಲಿಂಗಯ್ಯ ನಿಧನ

                  ದಲಿತ ಕವಿ ಸಿದ್ದಲಿಂಗಯ್ಯ ನಿಧನ

                          ಕನ್ನಡ ಸಾಹಿತ್ಯದ ಹಿರಿಯ ಕವಿ ಸಿದ್ದಲಿಂಗಯ್ಯ ಇಂದು ನಿಧನರಾಗಿದ್ದಾರೆ.  

ಬೆಂಗಳೂರು ಜೂನ್ 11:-ಕನ್ನಡದ ಹಿರಿಯ ಬರಹಗಾರ ಕವಿ ಸಿದ್ದಲಿಂಗಯ್ಯ ಅವರು ಕೊರೊನಾ ಸೋಂಕಿನಿಂದ ಶುಕ್ರವಾರ ನಿಧನವಾಗಿದ್ದಾರೆ. ಕೋವಿಡ್ ಸೋಂಕು ತಗಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ದೈವದೀನರಾಗಿದ್ದಾರೆ. ಅವರಿಗೆ ಎರಡು ಜನ ಮಕ್ಕಳು ಇದ್ದರು. ಮಗಳು ಮಾನಸಿ ಮತ್ತು ಮಗ ಗೌತಮ್.

  ದಲಿತ ಭಾಷೆಯನ್ನು ಅದರ ಸೊಗಡನ್ನು ದಲಿತರ ಬದುಕಿನ ಮಗ್ಗಲನ್ನು ಅತ್ಯಂತ ಶಕ್ತಿಶಾಲಿಯಾಗಿ ಬರಹಕ್ಕೆ ಇಳಿಸಿದ ಪ್ರತಿಭಾವಂತ ಸಾಹಿತಿ ಅವರು. ಕವಿ,ವಿಚಾರವಂತರಾಗಿದ್ದ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು. ಅಗಲಿದ ಕವಿಗೆ ಹಿರಿಯ ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.



                                             ಸಿದ್ದಲಿಂಗಯ್ಯ ಅವರು ತುಂಬು ಕುಟುಂಬ

                                       ಪತ್ನಿ ರಮಾಕುಮಾರಿ,ಮಗಳು ಮಾನಸಿ,ಮಗ ಗೌತಮ್ ಜೊತೆ



No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...