June 12, 2021

ಚಿ.ಶಿ.ನಿ.ನ್ಯೂಸ್ ಪಂಚಭೂತಗಳಲ್ಲಿ ಲೀನವಾದ ಸಿದ್ದಲಿಂಗಯ್ಯ

 ಪಂಚಭೂತಗಳಲ್ಲಿ ಲೀನವಾದ ಸಿದ್ದಲಿಂಗಯ್ಯ



ಬೆಂಗಳೂರು ಜೂನ್ 12:-ದಲಿತ ಪ್ರತಿಭಾನ್ವಿತ ಕವಿ,ಚಿಂತಕ ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ಇಂದು ಜರುಗಿತ್ತು. ಬೌದ್ದ ಧರ್ಮದ ವಿಧಿ ವಿಧಾನಗಳ ಮೂಲಕ ಅಂತಿಮ ಸಂಸ್ಕಾರವನ್ನು ನೇರವೇರಿಸಲಾಯಿತ್ತು. ಮಗ ಗೌತಮ್ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ರಮಾ,ಮಗಳು ಮಾನಸ,ಅಳಿಯ ಗಿರಿ ಇದ್ದರು. ಸರ್ಕಾರಿದ ಪರವಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಾಣ ಅಂತಿಮ ಗೌರವನ್ನು ಸಲ್ಲಿಸಿದರು.

ಅಂತಿಮ ದರ್ಶನದಲ್ಲಿ ನೆನಪುಗಳ ಮೆರವಣಿಗೆ

ಅಭಿಮಾನಿಗಳಿಗೆ ಅಂತಿಮ ದರ್ಶನ ಪಡೆಯುವ ಅವಕಾಶವನ್ನು ಮಾಡಿ ಕೊಡಲಾಗಿತ್ತು. ಅಂತಿಮ ದರ್ಶನಕ್ಕೆ ಪಡೆದ ವಿದ್ಯಾರ್ಥಿಗಳ ವೃಂದ,ಸಾಹಿತಿಗಳು,ಚಿಂತಕರು,ಅಗಲಿದ ಕವಿ ಜೊತೆಗಿನ ನೆನಪುಗಳನ್ನು ಮೆಲಕು ಹಾಕಿದರು. ನೆನಪುಗಳ ಮೆರವಣಿಗೆ ಅಲ್ಲಿ ನಡೆಯಿತ್ತು

No comments:

Post a Comment

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...